ಮಡಿಕೇರಿ, ಏ. 5: ಮೂರ್ನಾಡಿನ ಶ್ರೀ ಅಣ್ಣಪ್ಪಸ್ವಾಮಿ ನವಜೀವನ ಸ್ವಸಹಾಯ ಸಂಘದ 5ನೇ ವಾರ್ಷಿಕೋತ್ಸವ ಮೂರ್ನಾಡಿನ ಕಿಡ್ಸ್ ಪ್ಯಾರಡೈಸ್ ಮಕ್ಕಳ ಮನೆಯಲ್ಲಿ ನಡೆಯಿತು.

ಮೂರ್ನಾಡಿನಲ್ಲಿ ಕಳೆದ 5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಘದಲ್ಲಿ ಮಹಿಳೆಯರು ಹಾಗೂ ಪುರುಷರು ಸೇರಿದಂತೆ 45 ಮಂದಿ ಸದಸ್ಯರಿದ್ದು, ಪ್ರತೀ ವರ್ಷ ವಾರ್ಷಿಕೋತ್ಸವ ಸಂದರ್ಭ ಹಲವು ಚಟುವಟಿಕೆ ನಡೆಸುತ್ತಾ ಬಂದಿರುವದು ಸಂಘದ ವಿಶೇಷ.

5ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಸಂಘದ ಸದಸ್ಯರಿಂದ ಕೋಲಾಟ, ಆದರ್ಶ ದಂಪತಿ ಸ್ಪರ್ಧೆ, ಅಪಘಾತದ ಕುರಿತು ಜಾಗೃತಿ ಮೂಡಿಸುವ ನಾಟಕ ಪ್ರದರ್ಶನ ನಡೆಯಿತು. ಸಮಾಜ ಸೇವಕ ಹಾಗೂ ಮೂರ್ನಾಡು ಗ್ರಾಮ ಪಂಚಾಯ್ತಿ ಸದಸ್ಯ ಈ.ರಾ.ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಮನೋಜ್, ಕಾರ್ಯದರ್ಶಿ ಅಯ್ಯಪ್ಪ, ಸಂಘದ ಮಹಾ ಪೋಷಕರಾದ ಭಗವಾನ್ ಬಿಲ್ಡರ್ಸ್ ಮಾಲೀಕರಾದ ಎಸ್. ಸುರೇಶ್ ಹಾಗೂ ಪೂರ್ಣಿಮಾ ಸುರೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ವಿಶ್ವ ಹಿಂದೂ ಪರಿಷತ್ ಸಹ ಸಂಚಾಲಕ ಪುದಿಯೊಕ್ಕಡ ರಮೇಶ್, ಮಹಿಳಾ ಸಮಾಜದ ಅಧ್ಯಕ್ಷೆ ಬಡುವಂಡ ಸೀತಾ ಕಾರ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.