ಮಡಿಕೇರಿ, ಏ. 6: ಕರ್ನಾಟಕ ಅರೆಭಾಷೆ ಅಕಾಡೆಮಿ ಹಿರಿಯ ಸದಸ್ಯರಾಗಿದ್ದ ಮದುವೆಗದ್ದೆ ಬೋಜಪ್ಪ ಗೌಡ ಅವರು ಕಳೆದ ತಾ. 4 ರಂದು ಅಕಾಲಿಕ ದರ್ಮರಣ ಹೊಂದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಇಂದು ಅಕಾಡೆಮಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು, ಬೋಜಪ್ಪಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಬಳಿಕ ಮಾತನಾಡಿದ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಅವರು, ಅಕಾಡೆಮಿಯ ಕಾರ್ಯ ಚಟುವಟಿಕೆ ಬಗ್ಗೆ ಸಭೆ ನಡೆಸಬೇಕಾಗಿರುವ ಸಂದರ್ಭದಲ್ಲಿ ಸಂತಾಪ ಸಭೆ ಏರ್ಪಡಿಸುವ ದುರ್ದೈವ ಬಂದೊದಗಿರುವದು ದೌರ್ಭಾಗ್ಯವೆಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಬೋಜಪ್ಪ ಗೌಡರ ಅಕಾಲಿಕ ಮರಣ ಗೌಡ ಸಮೂದಾಯಕ್ಕೆ, ಸುಳ್ಯ ನಾಡಿಗೆ ತುಂಬಲಾರದ ನಷ್ಟವೆಂದು ಹೇಳಿದರು. ಸದಸ್ಯ ಬಾಕಿಲ ವಸಂತ ಅವರು ಬೋಜಪ್ಪ ಗೌಡರ ಜೀವನದ ಮಜಲುಗಳ ಸ್ಥೂಲ ಪರಿಚಯ ಮಾಡಿದರು. ಸದಸ್ಯರುಗಳಾದ ಮಂದ್ರಿರ ಮೋಹನ್‍ದಾಸ್, ಕುಡೆಕಲ್ ಸಂತೋಷ್, ಸದಾನಂದ ಮಾವಾಜಿ, ಪಿಂಡಿಮನೆ ಕಾರ್ಯಪ್ಪ, ಅಣ್ಣೋಜಿ ಗೌಡ ಬೋಜಪ್ಪ ಗೌಡರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಸಿಬ್ಬಂದಿಗಳಾದ ಜ್ಯೋತಿ, ಮಾನಸ, ಶೋಭ ಅವರುಗಳಿದ್ದರು.