ಮಡಿಕೇರಿ, ಏ. 6: ಇಲ್ಲಿಗೆ ಸನಿಹದ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕೆದಕಲ್ ಹೆದ್ದಾರಿಯಲ್ಲಿ ಮಾರುತಿ ವ್ಯಾಗನಾರ್ ಕಾರೊಂದು ಬೈಕ್‍ಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಸೇರಿದಂತೆ ಆತನ ಇಬ್ಬರು ಮಕ್ಕಳು ಗಂಭೀರ ಗಾಯಗಳೊಂದಿಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಇಂದು ಸಂಜೆ ವೇಳೆ ಈ ಅವಘಡ ಸಂಭವಿಸಿದ್ದು, ಬೈಕ್‍ನಲ್ಲಿ ಕೆದಕಲ್ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಾಮಚಂದ್ರ (43) ಅವರ ಮಕ್ಕಳಾದ ಕೀರ್ತನ್ (13) ಹಾಗೂ ಕೃತಿಕ್ (11) ಅವರುಗಳ ಕಾಲಿಗೆ ಗಂಭೀರ ಗಾಯಗಳಾಗಿವೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.

ಘಟನೆ ಬಗ್ಗೆ ವಿವರ ಬಯಸಿ ರಾತ್ರಿ ವೇಳೆಯಲ್ಲಿ ಸುಂಟಿಕೊಪ್ಪ ಠಾಣೆಗೆ ಫೋನಾಯಿಸಿದ ಸಂದರ್ಭ ನಮಗೆ ಯಾವದೇ ಕಂಪ್ಲೇಂಟ್ ಬಂದಿಲ್ಲ ಎಂಬ ಉತ್ತರ ಲಭಿಸಿತು.