ನಾಪೋಕ್ಲು, ಏ. 6: ಮಳೆ ಬೆಳೆ ದೇವರೆಂದೇ ಖ್ಯಾತಿ ಪಡೆದ ಮುಜರಾಯಿ ಇಲಾಖೆ ಅಧೀನದಲ್ಲಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಿಗೂ ಅತಿಕ್ರಮಣದ ಸಮಸ್ಯೆ ಎದುರಾಗಿದೆ.ಕಕ್ಕಬ್ಬೆ-ಕುಂಜಿಲ ಗ್ರಾಮದಲ್ಲಿ ಗದ್ದೆ-ಕಾಡು ಒಳಗೊಂಡ ದೇವರಕಾಡು ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ಸೇರಿದ 176 ಏಕ್ರೆ ದೇವಸ್ಥಾನದ್ದಾಗಿದ್ದು ಇದರ ಅಧೀನದಲ್ಲಿರುವ ನಿವಾಸಿಗಳ ಹೆಸರಿನಲ್ಲಿ ಆರ್‍ಟಿಸಿ, ಸಿಆರ್‍ಸಿ, ಸಿಡಿಆರ್ ದಾಖಲೆ ಹೊದಿದ್ದರೂ ಇದೀಗ ಹೆಚ್ಚುವರಿಯಾಗಿ ಇಲ್ಲಿನ ನಿವಾಸಿಗಳು ದೇವರಕಾಡನ್ನು ಕಡಿದು ಬೇಲಿ ನಿರ್ಮಿಸಿ ಅತಿಕ್ರಮಣದಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು ಇದನ್ನು ತಡೆಗಟ್ಟಲು ಇಂದು ಪಾಡಿ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಭಕ್ತಜನಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಒಟ್ಟು ಸೇರಿ ಜಿಲ್ಲಾಧಿಕಾರಿ ಅವರಿಗೆ ದೂರು ಸಲ್ಲಿಸಿರುವದಾಗಿ ದೇವತಕ್ಕರಾದ ಪರದಂಡ ಕಾವೇರಪ್ಪ ತಿಳಿಸಿದ್ದಾರೆ. -ದುಗ್ಗಳ