ಮಡಿಕೇರಿ, ಏ. 7: ಕುಶಾಲನಗರ ಸಮೀಪದ ಬೈಚನಹಳ್ಳಿಯ ನಿವಾಸಿ ಆರ್. ವಸಂತಮ್ಮ (72) ಎಂಬವರಿಗೆ ಮಡಿಕೇರಿ ಉಪವಿಭಾಗಾಧಿಕಾರಿ ಕಚೇರಿಯಿಂದ ಮೊಕದ್ದಮೆಯೊಂದರ ಸಂಬಂಧ ಸಕಾಲದಲ್ಲಿ ಸೂಕ್ತ ದಾಖಲೆ ಒದಗಿಸಿಲ್ಲ ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ವೃದ್ಧೆ ವಸಂತಮ್ಮ ನೀಡಿರುವ ದೂರಿನ ಮೇರೆಗೆ ಉ¥ Àವಿಭಾಗಾಧಿಕಾರಿ ನಂಜುಂಡೇ ಗೌಡ ವಿರುದ್ಧ ಲೋಕಾಯುಕ್ತ ಅಧಿಕಾರಿ ಸಿದ್ಧರಾಜು ದೂರು ದಾಖಲಿಸಿಕೊಂಡಿದ್ದಾರೆ. ಮಾ.30 ರಿಂದ ತಾವು ಅನೇಕ ಬಾರಿ ದಾಖಲೆಗಾಗಿ ಹೋಗಿದ್ದರೂ, ನೀಡದ ಮೇರೆಗೆ ಪ್ರಬಾರ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾಗಿಯೂ ಆಕೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಪ್ರಬಾರ ಜಿಲ್ಲಾಧಿಕಾರಿ ಚಾರುಲತ ಅವರು ಉಪವಿಭಾಗಾಧಿಕಾರಿ ಕಚೇರಿಗೆ ಸೂಚಿಸಿದ್ದರೂ ಕೂಡ ತನಗೆ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತದಿಂದ ಕ್ರಮಕ್ಕೆ ಕೋರಿದ ಮೇರೆಗೆ ಎಸಿ ವಿರುದ್ಧ ದೂರು ದಾಖಲಾಗಿದೆ ಎಂದು ವಸಂತಮ್ಮ ತಿಳಿಸಿದ್ದಾರೆ.