ವೀರಾಜಪೇಟೆ, ಏ. 6: ಮನೆಯ ಮಹಡಿಯ ಮೇಲಿನ ಹೆಂಚನ್ನು ದುರಸ್ತಿಪಡಿಸುತ್ತಿದ್ದಾಗ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಏಣಿಯಿಂದÀ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ಅಮ್ಮತ್ತಿಯಲ್ಲಿ ನಡೆದಿದೆ.

ಅಮ್ಮತ್ತಿ ಪಟ್ಟಣದ ಯು. ಬೋಪಣ್ಣ ಎಂಬವರಿಗೆ ಸೇರಿದ ಮನೆಯ ಮೇಲಿನ ಹೆಂಚನ್ನು ದುರಸ್ತಿಪಡಿಸುತ್ತಿದ್ದಾಗ ಏಣಿ ಮೇಲೆ ನಿಂತಿದ್ದ ಕೆ.ಆರ್. ಪೇಟೆಯ ರಾಮೇಗೌಡ (65) ಎಂಬವರು ಆಕಸ್ಮಿಕ ನೆಲದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ. ಇಲ್ಲಿನ ಗ್ರಾಮಾಂತರ ಪೊಲೀಸರು ಮನೆಯ ಮಾಲೀಕ ಬೋಪಣ್ಣ ಹಾಗೂ ಕಾರ್ಮಿಕ ರಾಮೇಗೌಡನನ್ನು ಕೆ.aಆರ್. ಪೇಟೆಯಿಂದ ಅಮ್ಮತ್ತಿಗೆ ಕರೆತಂದಿದ್ದ ನಾಚಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.