ಮಡಿಕೇರಿ, ಏ. 6: ಇಲ್ಲಿಗೆ ಸಮೀಪದ ದೇವಸ್ತೂರುವಿನಿಂದ ಮಕ್ಕಂದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದು, ಇದುವರೆಗೆ ಯಾವದೇ ದುರಸ್ತಿ ಕಾರ್ಯಕೈಗೊಳ್ಳದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖಾ ಕಚೇರಿಗಳಿಗೆ ಮುತ್ತಿಗೆ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಈ ಬಗ್ಗೆ ಲಿಖಿತ ಹೇಳಿಕೆ ನೀಡಿರುವ ಗ್ರಾಮಸ್ಥರು ನಬಾರ್ಡ್ ಮೂಲಕ ನಿರ್ಮಾಣವಾದ ಈ ಸಂಪರ್ಕ ರಸ್ತೆ ಕಳೆದ 10 ವರ್ಷಗಳಿಂದ ಯಾವದೇ ದುರಸ್ತಿ ಕಂಡಿಲ್ಲ. ಇದೀಗ ರಸ್ತೆ ಹದಗೆಟ್ಟು ಹೋಗಿದ್ದು, ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದರೂ ಯಾವದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಮಾಧ್ಯಮದ ಮೂಲಕ ಗಮನ ಸೆಳೆದರೂ ಯಾರೊಬ್ಬರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳೊಳಗೆ ಸ್ಪಂದಿಸದಿದ್ದಲ್ಲಿ ಜಿ.ಪಂ. ಇಂಜಿನಿಯರಿಂಗ್ ವಿಭಾಗ ಹಾಗೂ ಲೋಕೋಪಯೋಗಿ ಇಲಾಖಾ ಕಚೇರಿಗಳಿಗೆ ಮುತ್ತಿಗೆ ಹಾಕಲಾಗು ವದು. ಜನಪ್ರತಿನಿಧಿಗಳಿಗೂ ಘೇರಾವ್ ಹಾಕಲಾಗುವದೆಂದು ಎಚ್ಚರಿಸಿದ್ದಾರೆ.