ಮಡಿಕೇರಿ, ಏ.8 : ಕಲಾವಿದರನ್ನು ರಾಜಕೀಯವಾಗಿ ಗುರುತಿಸುವ ಹಾಗೂ ಪೆÇ್ರೀತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠವನ್ನು ರಚಿಸಲಾಗಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕಿÀ ಭಾರತೀ ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 11 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ ಉದ್ಘಾಟನೆ ಹಾಗೂ ಸಾಂಸ್ಕøತಿಕ ದಿನಾಚರಣೆÉಯನ್ನು ಆಯೋಜಿಸಿರುವದಾಗಿ ತಿಳಿಸಿದರು. ಸಂಸದ ಪ್ರತಾಪ ಸಿಂಹ, ಶಾಸಕಧ್ವಯರಾದ ಕೆ. ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷÀ ಬಿ.ಬಿ. ಭಾರತೀಶ್ ಪಾಲ್ಗೊಳ್ಳಲಿದ್ದಾರೆ ಎಂದರು.

ಸಾಂಸ್ಕøತಿಕ ರಾಷ್ಟ್ರವಾದದ ಮಂಡನೆ ಹಾಗೂ ಮೂರು ತಾಲೂಕುಗಳಲ್ಲಿ ಸಾಧನೆ ಮಾಡಿರುವ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಲಾವಿದರು ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಭಾರತೀ ರಮೇಶ್ ಮಾಹಿತಿ ನೀಡಿದರು.

ಕಲಾವಿದರ ಸಂಘಟನೆ ಸಾಧನೆ ಮಾಡಿದ ಕಲಾವಿದರನ್ನು ಪೆÇ್ರೀತ್ಸಾಹಿಸು ವದು, ಸಮಸ್ಯೆಗಳಿಗೆ ಸ್ಪಂದಿಸುವುದು, ಶಾಲಾ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ರೂಪಿಸುವುದು, ಚುನಾವಣೆ ಸಂದರ್ಭ ಕಲಾವಿದರು ಸಕ್ರೀಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವದು ಪ್ರಕೋಷ್ಠದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಪ್ರಕೋಷ್ಠದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಹ ಸಂಚಾಲಕರಾಗಿ ಕಡಗದಾಳುವಿನ ಮಿಟ್ಟು ಪÀÇಣಚ್ಚ, ಕುಶಾಲನಗರದ ರಾಜು ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ಮಂಡಲಕ್ಕೆ ಕಲಾವಿದ ಬಿ.ಸಿ. ಶಂಕರಯ್ಯ, ವೀರಾಜಪೇಟೆಗೆ ಕುಂಞÂೀರ ಸನ್ನಿ, ಮಡಿಕೇರಿ ತಾಲೂಕಿಗೆ ವಸಂತ, ನಗರಕ್ಕೆ ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ ಎಂದು ಭಾರತೀ ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠದ ಪದಾಧಿಕಾರಿಗಳಾದ ಸಂತೋಷ್, ರವಿ, ವಸಂತ, ಸವಿತಾ ರಾಕೇಶ್ ಹಾಗೂ ಪ್ರಫುಲ್ಲ ಉಪಸ್ಥಿತರಿದ್ದರು.