ಮಡಿಕೇರಿ, ಏ. 8: ಶ್ರೀ ರಾಮನವಮಿ ಪ್ರಯುಕ್ತ ಶ್ರೀ ರಾಮೋತ್ಸವ ಸಮಿತಿ ಹಾಗೂ ಶ್ರೀ ಓಂಕಾರೇಶ್ವರ ದೇವಸ್ಥಾನದ ವತಿಯಿಂದ ಓಂಕಾರ ಸದನದಲ್ಲಿ ಆಯೋಜಿಸಲಾಗಿದ್ದ ಶ್ರೀ ರಾಮೋತ್ಸವದಲ್ಲಿ ನಗರದ ಶಿವಶಕ್ತಿ ಮಹಿಳಾ ವೃಂದದಿಂದ ಶ್ರೀ ರಾಮ ರಕ್ಷಸ್ತ್ರೋತ್ರ ಮತ್ತು ಭಗವದ್ಗೀತೆ ಪಠಣ ಕಾರ್ಯಕ್ರಮ ನಡೆಯಿತು. ಸಂಜೆ ಪುತ್ತೂರಿನ ವಿದುಷಿ ಸುಚಿತ್ರ ಹೊಳ್ಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.