ಶನಿವಾರಸಂತೆ, ಏ. 9: ಇಲ್ಲಿನ ಶುಂಠಿಮಂಗಳೂರು ನಿವಾಸಿ ಎಂ.ಎ. ಜಯರಾಮ ಎಂಬವರಿಗೆ ಕೊರ್ಲಳ್ಳಿ ನಿವಾಸಿ ವಸಂತ ಎಂಬಾತ ಹಲ್ಲೆ ನಡೆಸಿ, ಜಯರಾಂ ಅವರಿಗೆ ಸೇರಿದ ಕೋವಿಯನ್ನು ಮುರಿದು ಹಾಕಿರುವ ಬಗ್ಗೆ ಪೊಲೀಸ್ ಮೊಕದ್ದಮೆ ದಾಖಲಾಗಿದೆ. ಗಾಯಾಳು ಜಯರಾಂ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.