ಭಾಗಮಂಡಲ, ಏ. 10: ಇಲ್ಲಿನ ಐತಿಹಾಸಿಕ ಶ್ರೀ ಭಗಂಡೇಶ್ವರ ದೇವಾಲಯದ ಪ್ರತಿಷ್ಠಾ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನಿಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಜರುಗುತ್ತಿದೆ.

ದೇವಾಲಯದಲ್ಲಿ ಗಣಹೋಮದೊಂದಿಗೆ ಆರಂಭಗೊಂಡ ಪ್ರತಿಷ್ಠಾ ವಾರ್ಷಿಕೋತ್ಸವದಲ್ಲಿ ನಿನ್ನೆ ಭಗಂಡೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಬಿಂಬ ಶುದ್ಧಿ, ವಿವಿಧ ಅಭಿಷೇಕಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗ, ಸಂಜೆ ತಾಯಂಬಕ, ಮಹಾಪೂಜೆ, ರಾತ್ರಿ ದೇವರ ನೃತ್ಯ ಉತ್ಸವ ಜರುಗಿತು.

ಇಂದು ಗಣಹೋಮದೊಂದಿಗೆ ಆರಂಭಗೊಂಡು ವಿವಿಧ ಅಭಿಷೇಕಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ತಾಯಂಬಕ, ಮಹಾಪೂಜೆ, ರಾತ್ರಿ ದೇವ ನೃತ್ಯ ಜರುಗಿತು. ತಾ. 11 ರಂದು (ಇಂದು) ಉತ್ಸವ ಸಮಾಪನಾಗೊಳ್ಳಲಿದೆ.