ಸೋಮವಾರಪೇಟೆ, ಏ. 20: ಇಲ್ಲಿಗೆ ಸಮೀಪದ ಹಳ್ಳಿದಿಣ್ಣೆ-ಕುಸುಬೂರು ಗ್ರಾಮದ ಶ್ರೀ ಮುನೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಚೌಡಿ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ 8 ಗಂಟೆಗೆ ಮುನೇಶ್ವರ ಸನ್ನಿಧಿಯಲ್ಲಿ ಸೊಪ್ಪಿನ ಬಸವಣ್ಣ ದೇವರ ಸನ್ನಿಧಿ ಪೂಜೆ ನಡೆಯಿತು. ನಂತರ ಗ್ರಾಮದ ಚೌಡಿಮರದಡಿಯಲ್ಲಿ ಚಾಮುಂಡೇಶ್ವರಿ, ಗುಳಿಗಪ್ಪ ಹಾಗೂ ಗ್ರಾಮ ದೇವತೆಗಳಿಗೆ ವಿವಿಧ ಅರ್ಚನೆ ಪೂಜೆಗಳು ಎಸ್.ಆರ್. ಶ್ರೀನಿವಾಸ್ ಭಟ್ ಪೌರೋಹಿತ್ಯದಲ್ಲಿ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಲಾಗಿತ್ತು.