ಸುಂಟಿಕೊಪ್ಪ, ಏ. 20: ಗೌಡ ಸಂಘ ಸುಂಟಿಕೊಪ್ಪ ನಾಡು ಸಂಘದ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುಂಟಿಕೊಪ್ಪ ಗೌಡ ಸಂಘದ ಸದಸ್ಯ ಬಿ.ಬಿ. ಭಾರತೀಶ್ ಅವರನ್ನು ಸನ್ಮಾನಿಸಲಾಯಿತು.

ಗದ್ದೆಹಳ್ಳದ ಪಟ್ಟೆಮನೆ ಲೋಕೇಶ್ ಎಂಬವರ ಮನೆಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಗೌಡ ಸಂಘ ಸುಂಟಿಕೊಪ್ಪ ನಾಡು ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್, ಉಪಾಧ್ಯಕ್ಷ ಬಿಳಿಯಾರ ಮಂಜು, ಖಜಾಂಚಿ ಪಟ್ಟೆಮನೆ ಉದಯಕುಮಾರ್, ಸಹ ಕಾರ್ಯದರ್ಶಿ ಮಾಗಲು ವಸಂತ, ಯಂಕನ ಕರುಂಬಯ್ಯ, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಸುದೀಶ್, ಗ್ರಾ.ಪಂ. ಸದಸ್ಯೆ ಗಿರಿಜಾ ಉದಯಕುಮಾರ್ ಸನ್ಮಾನಿಸಿದರು.

ಈ ಸಂದರ್ಭ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬಿಳಿಯಾರ ಜಯಶೀಲಾ ಮಂಜು ಪ್ರಾರ್ಥಿಸಿ, ಕುದುಪಜೆ ಲತಾ ಸುರೇಶ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಯಂಕನ ಕೌಶಿಕ್ ನಿರೂಪಿಸಿ, ಪಟ್ಟೆಮನೆ ಕುಸುಮ ವಂದಿಸಿದರು.