ಸಿದ್ದಾಪುರ, ಏ. 21: ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಚರಂಡಿಗೆ ಮಗುಚಿಕೊಂಡ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಮಾಲ್ದಾರೆ ಸಮೀಪ ಇಂದು ನಡೆದಿದೆ.ಸಿದ್ದಾಪುರದಿಂದ ಹುಣಸೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸ್ (ಕೆ.ಎ. 17 ಎಫ್ 1422) ಮಾಲ್ದಾರೆ ಸಮೀಪ ರಸ್ತೆ ಬದಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 2 ವರ್ಷದ ಮಗು ರೀಶ್ವನ್ ಸೇರಿದಂತೆ ಗುಡ್ಲೂರಿನ ಮರಿಯಾ (60), ದಿಡ್ಡಳ್ಳಿಯ ದಿನೇಶ , ಅಫ (15), ನಾಲ್ವರು ಸಣ್ಣಪುಟ್ಟ ಗಾಯಗೋಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮೂಗು ಹಾಗೂ ಕೈಗಳಿಗೆ ಗಾಯಾವಾಗಿದ್ದರಿಂದ ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಚಿತ್ರ,ವರದಿ: ವಾಸು ಆಚಾರ್ಯ