ಮಡಿಕೇರಿ, ಏ. 24: ಬಾಳುಗೋಡುವಿನಲ್ಲಿರುವ ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಹಾಗೂ ಸಮಾಜದ ವತಿಯಿಂದ ತಾ. 29 ರಿಂದ 3 ದಿನ ಕ್ರೀಡಾಕೂಟ ಏರ್ಪಡಿಸಲಾಗಿದೆ.

ಜನಾಂಗದವರಿಗಾಗಿ 16ನೇ ವರ್ಷದ ಈ ಕ್ರೀಡಾಕೂಟ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸಮಾಜದ ಅಧ್ಯಕ್ಷ ಪಿ.ಜಿ. ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಪ್ರಮುಖರಾದ ಕೆ.ಯು. ರಮೇಶ್, ಪಿ.ಯಂ. ಪೆಮ್ಮಯ್ಯ, ಪಿ. ಪ್ರಕಾಶ್ ಸುಬ್ಬಯ್ಯ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾಜದ ಸಾಧಕರಿಗೆ ಸನ್ಮಾನದೊಂದಿಗೆ ಮೇ 1 ರಂದು ಸಮಾರೋಪ ನಡೆಯಲಿದೆ. ಅಂದು ಮಧ್ಯಾಹ್ನ 2.30ಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಮೋಹನ್ ಹಾಗೂ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಸಿ. ರವಿ ಅವರುಗಳು ಭಾಗವಹಿಸಲಿದ್ದು, ಟಿ. ನಾಣಯ್ಯ, ಮೊದಲಾದವರು ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.