ಸಿದ್ದಾಪುರ, ಏ. 23: ಸಿದ್ದಾಪುರದಲ್ಲಿ ತಾ. 29 ಹಾಗೂ 30 ರಂದು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ಆಟೋ ಕ್ರಾಸ್ ಹಮ್ಮಿಕೊಳ್ಳಲಾಗಿದೆ ಎಂದು ಸೌತ್ ಇಂಡಿಯನ್ ಸ್ಪೋಟ್ರ್ಸ್ ಆಂಡ್ ಹೆಲ್ತ್ ಕ್ಲಬ್‍ನ ಸಂತೋಶ್ ಸಿಕ್ವೇರಾ ತಿಳಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರದ ರ್ಯಾಲಿ ಪಟು ದಿ. ಜುಗುನ್ ಕಾರ್ಯಪ್ಪ ಅವರ ಸ್ಮರಣಾರ್ಥ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ತಾ. 29 ಹಾಗೂ 30 ರಂದು ಸಿದ್ದಾಪುರದ ರಿವರ್‍ಸೈಡ್ ಎಸ್ಟೇಟ್‍ನ ಗದ್ದೆ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.

ದ್ವಿಚಕ್ರ ವಾಹನದ ಒಟ್ಟು 10 ವಿಭಾಗದಲ್ಲಿ ನಡೆಯಲಿದ್ದು, ಬಿಗಿನಿಂಗ್ ಕ್ಲಾಸ್, ಕೂರ್ಗ್ ಒಪನ್ ಕ್ಲಾಸ್, ಕೂರ್ಗ್ ನೋವಿಸ್ ಕ್ಲಾಸ್, 2 ಸ್ಟ್ರೋಕ್ ಒಪನ್ ಕ್ಲಾಸ್, 4 ಸ್ಟ್ರೋಕ್ ಒಪನ್ ಕ್ಲಾಸ್, ಇಂಡಿಯನ್ ಎಕ್ಸ್‍ಪರ್ಟ್ ಕ್ಲಾಸ್, ಗೇರ್ಲೆಸ್ ಕ್ಲಾಸ್, ಬುಲ್ಲೆಟ್ ಕ್ಲಾಸ್, ಸ್ಟೋಕ್ ಕ್ಲಾಸ್‍ನಲ್ಲಿ ನಡೆಯಲಿದೆ.

ನಾಲ್ಕು ಚಕ್ರದ ವಾಹನದ ಆಟೋ ಕ್ರಾಸ್ ನಲ್ಲಿ 10 ವಿಬಾಗದಲ್ಲಿ ನಡೆಯಲಿದ್ದು, 800 ಸಿಸಿ, 1300 ಸಿಸಿ, 1400 ಸಿಸಿ, 1600 ಸಿಸಿ, ಇಂಡಿಯನ್ ಒಪನ್, ಕೂರ್ಗ್ ಒಪನ್ ಕ್ಲಾಸ್, ಜಿಪ್ಸಿ ಕ್ಲಾಸ್, ಜೀಪ್ ಒಪನ್ ಕ್ಲಾಸ್, ಲೇಡಿಸ್ ಕ್ಲಾಸ್, ರೋಲ್ ಗೇಜ್ ಕ್ಲಾಸ್, ಎಕ್ಸ್.ಯು.ವಿ ಕ್ಲಾಸ್ ನಡೆಯಲಿದೆ ಎಂದರು.

ಎಲ್ಲಾ ವಿಭಾಗದಲ್ಲಿಯು ವಿಜೇತರಿಗೆ ನಗದು ಹಾಗೂ ಟ್ರೋಫಿಯನ್ನು ನೀಡಲಾಗುತ್ತಿದ್ದು, ಪಂದ್ಯಾವಳಿಯ ಉತ್ತಮ ರ್ಯಾಲಿಪಟುವಿಗೆ 25 ಸಾವಿರ ರೂ. ನಗದು ನೀಡಲಾಗುವದು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಂಸದÀ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ಬೆಂಗಳೂರು ಎಸಿಪಿ ಸುಬ್ರಮಣಿ, ಡಿ.ವೈ.ಎಸ್.ಪಿ ಸಂಪತ್ ಕುಮಾರ್, ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಎ.ಕೆ ಹಕ್ಕೀಂ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ದಿಲ್‍ರೂಪ್, ಸಂತೋಷ್, ಬಾಲಕೃಷ್ಣ ಇದ್ದರು.