ಸುಂಟಿಕೊಪ್ಪ, ಏ. 25: ಅಂಬೇಡ್ಕರ್ ಭವನ ಸಮಿತಿಯ ಸ್ಥಾಪಕ ಅಧ್ಯಕ್ಷ ಹೆಚ್.ಪಿ.ಶಿವಕುಮಾರ್ ಅವರನ್ನು ಭವನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಸಮಾಜ ಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವದಲ್ಲದೆ, ಸುಂಟಿಕೊಪ್ಪದಲ್ಲಿ ಸ್ಥಾಪನೆಯಾದ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಹೋರಾಟ ಹಾಗೂ ಬಹಳಷ್ಟು ಶ್ರಮವಹಿಸಿ ಭವನವನ್ನು ನಿರ್ಮಿಸಿದ್ದ ಶಿವಕುಮಾರ್ ಸೇವೆಯನ್ನು ಮನ್ನಿಸಿ ಅವರನ್ನು ಅಂಬೇಡ್ಕರ್ ಭವನ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭ ಅಂಬೇಡ್ಕರ್ ಭವನ ಸಮಿತಿ ಅಧ್ಯಕ್ಷ ಸುರೇಶ್ ಮಹೇಶ್, ಕಾರ್ಯದರ್ಶಿ ಹೆಚ್.ಡಿ. ಕಾವೇರಪ್ಪ, ಉಪಾಧ್ಯಕ್ಷೆ ಎಸ್.ಎನ್. ಸಾವಿತ್ರಿ, ಗೌರವಾಧ್ಯಕ್ಷ ಬೆಟ್ಟಪ್ಪ, ಸಹ ಕಾರ್ಯದರ್ಶಿ ಬಿ.ಎ. ಶಿವಪ್ಪ, ನಿರ್ದೇಶಕರಾದ ಯು.ಎನ್. ಪೊನ್ನಪ್ಪ, ಮಮತ, ಖಜಾಂಚಿ ಹೆಚ್.ಎ. ಮಂಜುನಾಥ, ಸದಸ್ಯರಾದ ಹೆಚ್.ಆರ್ ರಾಜು, ಕಾವೇರಪ್ಪ ಹೆಚ್.ಎಂ., ಪ್ರಶಾಂತ್, ಲೋಕೇಶ್, ರವಿಶಂಕರ, ಸಂತೋಷ್ ಮಹೇಶ್, ನೇತ್ರಾವತಿ ಇತರರು ಇದ್ದರು.