ಸೋಮವಾರಪೇಟೆ, ಏ. 26: ನಿವೃತ್ತ ಡಿವೈಎಸ್‍ಪಿ ಮನೆಯಿಂದ ಕಾಳುಮೆಣಸು ಕಳ್ಳತನವಾಗಿರುವ ಬಗ್ಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಡವಾರೆ ಗ್ರಾಮದ ನಿವೃತ್ತ ಡಿವೈಎಸ್‍ಪಿ ಸೋಮಣ್ಣ ಅವರು ಕಾಳುಮೆಣಸನ್ನು ಕಣದಲ್ಲಿ ಒಣಗಲು ಹಾಕಿದ್ದು, ಮಂಗಳವಾರ ಸಂಜೆ 50 ಕೆ.ಜಿ. ಕಾಳುಮೆಣಸನ್ನು ಯಾರೋ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.