ಕುಶಾಲನಗರ, ಏ. 27 : ಕುಶಾಲನಗರ ಸಂತ ಸೆಬಾಸ್ಟಿಯನ್ನರ ದೇವಾಲಯದ ನೂತನ ಕಟ್ಟಡ ಉದ್ಘಾಟನೆ ಮೇ 1 ರಂದು ನಡೆಯಲಿದೆ. ಕಟ್ಟಡದ ಉದ್ಘಾಟನೆಯನ್ನು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷÀ ಡಾ.ಕೆ.ಎ.ವಿಲಿಯಂ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ನಿಕಟಪೂರ್ವ ಧರ್ಮಾಧ್ಯಕ್ಷÀ ಡಾ.ಥಾಮಸ್ ಅಂಥೋಣಿ ವಾಳಪಿಳ್ಳೈ ದಿವ್ಯ ಸಾನಿಧ್ಯ ವಹಿಸುವರು ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.