ಮಡಿಕೇರಿ, ಏ. 27: ಶ್ರೀ ಓಂಕಾರೇಶ್ವರ ದೇವಾಲಯ ಆಡಳಿತ ವ್ಯವಸ್ಥೆಯ ಶ್ರೀ ಆಂಜನೇಯ ದೇವಾಲಯದ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ ಇಂದು ನೆರವೇರಿತು. ನಿನ್ನೆ ರಾತ್ರಿ ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ, ಮಹಾಪೂಜೆ ಜರುಗಿತು.ಇಂದು ಬೆಳಿಗ್ಗೆ ಗಣಪತಿ ಹೋಮ, ಶುದ್ಧ ಕಲಶ, ಕಲಶಾಭಿಷೇಕ, ಮಹಾಪೂಜೆಯೊಂದಿಗೆ ಪ್ರಸಾದ ವಿತರಿಸಲಾಯಿತು. ನೀಲೇಶ್ವರ ಪದ್ಮನಾಭ ಕಿರಿಯ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಶ್ರೀಧರ ತಂತ್ರಿ ಹಾಗೂ ತಂಡದಿಂದ ದೈವಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಜಿ. ರಾಜೇಂದ್ರ, ಕೆ.ಎಸ್. ರಮೇಶ್ ಹೊಳ್ಳ, ಹೊಸೂರು ರಮೇಶ್ ಜೋಯಪ್ಪ, ಗೀತಾ ಮಧುಕರ್, ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಸೇರಿದಂತೆ ಸನ್ನಿಧಿ, ಅರ್ಚಕ ಸಂತೋಷ್ ಭಟ್ ನೇತೃತ್ವದಲ್ಲಿ ಅರ್ಚಕ ಬಳಗ ಪಾಲ್ಗೊಂಡಿದ್ದರು.

ವ್ಯವಸ್ಥಾಪನಾ ಸಮಿತಿಯ ಮಾಜೀ ಸದಸ್ಯರುಗಳಾದ ಅರುಣ್ ಕುಮಾರ್, ಅಂಬೆಕಲ್ ಕುಶಾಲಪ್ಪ, ಕಮಲಾ ಮುರುಗೇಶ್, ಶಾರದ ಮಂದಪ್ಪ, ಯೋಗೀಶ್ ಮಲ್ಯ ಮೊದಲಾದವರು ಹಾಜರಿದ್ದರು.

ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭ ಸ್ಫೂರ್ತಿ ಮಹಿಳಾ ತಂಡದಿಂದ ಭಜನೆ ಹಾಗೂ ಮಂಗಳೂರುವಿನ ಕದ್ರಿ ಯಕ್ಷ ಮಂಜುಳ ಮಹಿಳಾ ತಂಡದಿಂದ ಗದಾಯುದ್ಧ ಯಕ್ಷಗಾನ ತಾಳಮದ್ದಳೆ ನಡೆಯಿತು.