ಮಡಿಕೇರಿ, ಏ.28 : ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಣಿಕೆ ಮಾಡುವ ಬಗ್ಗೆ ಬಂದ ದೂರು ಸಂಬಂಧ ಕಡಿಯತ್ತೂರು ಗ್ರಾಮಸ್ಥರ ಸಮಕ್ಷಮ ಅಕ್ರಮ ಮರಳು ತೆಗೆಯುವ ಪ್ರದೇಶಕ್ಕೆ ಭೇಟಿ ನೀಡಿ ಒಂದು ಕಬ್ಬಿಣದ ಬೋಟ್ ಮತ್ತು ಸಾಮಗ್ರಿ ವಶಪಡಿಸಿಕೊಂಡು, ನಾಪೋಕ್ಲು ಪೊಲೀಸ್ ಠಾಣೆ ವಶಕ್ಕೆ ನೀಡಿ ಬೆಟ್ಟಗೇರಿ ಗ್ರಾಮದ ಪ್ರಸನ್ನ ಕುಮಾರ್ ಮತ್ತು ನವೀನ್ ಕಡಿಯತ್ತೂರು ವಿರುದ್ಧ ಮೊಕದ್ದಮೆ ದಾಖಲಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ನಾಗೇಂದ್ರಪ್ಪ ತಿಳಿಸಿದ್ದಾರೆ.