ಮಡಿಕೇರಿ ಮೇ 3 : ಅರ್ವತ್ತೋಕ್ಲುವಿನ ಪೆರಾತ ಯುವಕ ಸಂಘ ಹಾಗೂ ಜನನಿ ಮತ್ತು ಜಾಗೃತಿ ಸ್ವಸಹಾಯ ಸಂಘಗಳ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಸಿದ್ದಲಿಂಗಪುರದ ರವಿ ಫ್ರೆಂಡ್ಸ್ ಪ್ರಥಮ ಹಾಗೂ ಎಮ್ಮೆಮಾಡು ತಂಡ ದ್ವಿತೀಯ ಸ್ಥಾನ ಪಡೆದವು. ಥ್ರೋಬಾಲ್‍ನಲ್ಲಿ ಕಟ್ಟೆಮಾಡಿನ ಆದರ್ಶ ಯುವತಿ ಮಂಡಳಿ ಪ್ರಥಮ ಮತ್ತು ನಾಪೋಕ್ಲುವಿನ ಸ್ಪೋಟ್ರ್ಸ್ ಜೋóನ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು.

ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮತ್ತು ಮಡಿಕೇರಿ ತಾಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಕ್ರೀಡಾಕೂಟವನ್ನು ಸ್ಥಳೀಯರಾದ ಬಾಳಾಡಿ ಲಲಿತ ಉದ್ಘಾಟಿಸಿದರು. ಊರಿನ ಹಿರಿಯರಾದ ನಿವೃತ್ತ ಅಧಿಕಾರಿ ತುಂತ್ತಜಿರ ವೆಂಕಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್, ಸದಸ್ಯರಾದ ತುಂತ್ತಜಿರ ಕುಮುದಾ ರಶ್ಮಿ, ಮೇಕೇರಿ ಗ್ರಾ.ಪಂ ಅಧ್ಯಕ್ಷರಾದ ಕೆ.ಎಸ್.ಜಯಂತಿ, ಉಪಾಧ್ಯಕ್ಷರಾದ ಕೆ.ಕೆ.ಭೀಮಯ್ಯ, ಸದಸ್ಯರಾದ ಪುಷ್ಪಾ ನಾಣಯ್ಯ, ಬೆಟ್ಟಗೇರಿ ಗ್ರಾ.ಪಂ ಉಪಾಧ್ಯಕ್ಷರಾದ ತಳೂರು ಶಾಂತಿ ಸೋಮಣ್ಣ ಸದಸ್ಯರಾದ ಟಿ.ಕೆ.ಪೊನ್ನಪ್ಪ, ಸ್ಥಳೀಯರಾದ ಕುಲ್ಯಚನ ದಿನೇಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.