ಮೂರ್ನಾಡು, ಮೇ 3 : ಕೊಡವ ಐರಿ ಸಮಾಜದ ವತಿಯಿಂದ ಐರಿ ಕುಟುಂಬಗಳ ನಡುವೆ 6ನೇ ವರ್ಷದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ತಾ. 6 ಮತ್ತು 7 ರಂದು ನಡೆಯಲಿದೆ.

ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ತಾ. 6 ರಂದು ಬೆಳಿಗ್ಗೆ 9 ಗಂಟೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಡೇಪಂಡ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ, ಚೇರಂಬಾಣೆ ಕಾಫಿ ಬೆಳೆಗಾರ ಬಬ್ಬೀರ ತಮ್ಮಯ್ಯ ಆಗಮಿಸಲಿದ್ದಾರೆ. ಪಂದ್ಯಾವಳಿಯ ಉದ್ಘಾಟನೆಯನ್ನು ಐರಿ ಕ್ರಿಕೆಟ್ ಸ್ಥಾಪಕ ಅಮ್ಮಣಂಡ ಪೂಣಚ್ಚ, ನ್ಯೂ ಇಂಡಿಯಾ ಇನ್ಸುರೆನ್ಸ್ ಉದ್ಯೋಗಿ ಐರೀರ ಮನು ಐಯ್ಯಣ್ಣ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡವ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ಎ. ರಮೇಶ್ ವಹಿಸಲಿದ್ದಾರೆ.

ತಾ. 7ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಬಿಬಿಎಂಪಿ ಕಾರ್ಪೋರೇಟರ್ ವೇಲು ನಾಯ್ಕರ್, ಕೊಡವ ಐರಿ ಸಮಾಜದ ಸ್ಥಾಪಕ ಅಧ್ಯಕ್ಷ ಮೇಲತ್ತಂಡ ಎ. ಗೋಪಾಲ್, ಪೊನ್ನಿರ ಗಗನ್, ಬಾಳೇರ ರವಿ ಮುತ್ತಪ್ಪ, ತಟ್ಟಂಡ ಸತೀಶ್, ಶಂಗೀರ ಅಶೋಕ್ ಉತ್ತಪ್ಪ, ಆಂಗೀರ ಪಾರ್ವತಿ ಗಣಪತಿ, ಕಾಮೆಯಂಡ ಲೀಲಾವತಿ ಆಗಮಿಸಲಿದ್ದಾರೆ. ಕೊಡವ ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಅಧ್ಯಕ್ಷತೆ ವಹಿಸಲಿದ್ದಾರೆ.