ಸೋಮವಾರಪೇಟೆ, ಮೇ 6: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ ನಿವಾಸಿ, ವೆಂಕಟೇಶ್ (35) ಎಂಬಾತ ಅದೇ ಗ್ರಾಮದ 22ರ ಪ್ರಾಯದ ಯುವತಿಯನ್ನು ಪ್ರೀತಿಸುತ್ತಿದ್ದು, ಕಳೆದ ತಾ. 1 ರಂದು ಆಂಧ್ರಪ್ರದೇಶದ ಚಿನ್ನಮ್ಮತ್ತೂರ್ ದೇವಾಲಯಕ್ಕೆ ಕರೆದೊಯ್ದು ವಿವಾಹವಾಗಿದ್ದನು.

ಯುವತಿಯ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಇಲ್ಲಿನ ಠಾಣೆಗೆ ದೂರು ನೀಡಿದ್ದು, ಪೊಲೀಸರು ಈರ್ವರನ್ನು ಪತ್ತೆಹಚ್ಚಿ ಆಂಧ್ರಪ್ರದೇಶದಿಂದ ಕರೆತಂದಿದ್ದಾರೆ. ಇಲ್ಲಿನ ಠಾಣೆಗೆ ಆಗಮಿಸಿದ ಸಂದರ್ಭ ವೆಂಕಟೇಶ್ ಅದೇ ಗ್ರಾಮದ ಮಹಿಳೆಯೊಂದಿಗೆ ಕಳೆದ 6 ವರ್ಷಗಳಿಂದ ಸಂಬಂಧವಿಟ್ಟು ಕೊಂಡಿದ್ದು, ಇವರಿಗೆ ಮಗು ಇರುವ ವಿಷಯ ಯುವತಿಗೆ ತಿಳಿದುಬಂದಿದೆ.

ಆ ಮೇರೆಗೆ ತನ್ನನ್ನು ಪುಸಲಾಯಿಸಿ ಆಂಧ್ರಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾಗಿ ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಈಕೆಯ ದೂರಿನ ಮೇರೆಗೆ ಆರೋಪಿ ವೆಂಕಟೇಶ್‍ನನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.