ಸಿದ್ದಾಪುರ, ಮೇ 7: ಮಾರುತಿ ಓಮ್ನಿ ಕಾರಿನ ಚಕ್ರ ಸ್ಫೋಟಗೊಂಡ ಪರಿಣಾಮ ಎದುರಿನಿಂದ ಬರುತ್ತಿದ್ದ ಬೊಲೆರೊಗೆ ಡಿಕ್ಕಿ ಹೊಡೆದು ಕಾರಿನ ಚಾಲಕ ತೀವ್ರ ಗಾಯಗೊಂಡ ಪ್ರಕರಣ ಇಂದು ಸಂಜೆ ನಡೆದಿದೆ.

ನೆಲ್ಲಿಹುದಿಕೇರಿಯ ಗುತ್ತಿಗೆದಾರ ಶಿವದಾಸ್ ತನ್ನ ಜೀಪು (ಕೆಎ 12- 4512)ನಲ್ಲಿ ವೀರಾಜಪೇಟೆಯತ್ತ ತೆರಳುತ್ತಿದ್ದ ಸಂದರ್ಭ ಹಾತೂರಿನಿಂದ ವೀರಾಜಪೇಟೆಯತ್ತ ಸಜನ್ ಎಂಬವರು ಚಾಲಿಸಿಕೊಂಡು ಬರುತ್ತಿದ್ದ ಮಾರುತಿ ಓಮ್ನಿ (ಕೆಎ 12-5135) ಕಾರಿನ ಚಕ್ರ ಸ್ಫೋಟಗೊಂಡು ಜೀಪ್‍ಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಚಾಲಕ ಸಜನ್ ಅವರ ಕಾಲಿಗೆ ಗಂಭೀರ ಗಾಯಗೊಂಡು ಶಿವದಾಸ್ ಸಣ್ಣಪುಟ್ಟ ಗಾಯಗಳೊಂದಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.