ಕೊಡವ ಕೌಟುಂಬಿಕ ಹಾಕಿ ನಮ್ಮೆ ಬಿದ್ದಾಟಂಡ ಕಪ್ ಅಂತಿಮ ಹಂತ ತಲುಪಿದ್ದು, ತಾ. 14ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಎಲ್ಲಾ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ತಾಂತ್ರಿಕ ನಿರ್ದೇಶಕ ಬಿ.ಎಸ್.ತಮ್ಮಯ್ಯ ಹೇಳಿದರು.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿದ್ದಾಟಂಡ ಕಪ್ ಹಾಕಿ ನಮ್ಮೆಯಲ್ಲಿ 306 ತಂಡಗಳು ಭಾಗವಹಿಸಿವೆ. ಸೆಮಿಫೈನಲ್‍ಗೆ ನಾಲ್ಕು ತಂಡಗಳು ಅರ್ಹತೆ ಪಡೆದಿವೆ. ಅಂತಿಮವಾಗಿ ಜಯಗಳಿಸಿದ ಎರಡು ತಂಡಗಳ ನಡುವೆ ಮೇ. 14ರಂದು ಫೈನಲ್ ಪಂದ್ಯ ನಡೆಯಲಿದೆ. ಕೊಡವ ಹಾಕಿ ಪಂದ್ಯಾಟದಲ್ಲಿ ಮೊದಲ ಬಾರಿ ಎಂಬಂತೆ ಪ್ರೀ ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿದ ಎಂಟು ತಂಡಗಳಿಗೆ ನಗದು ಬಹುಮಾನವನ್ನು ನೀಡಲಾಗುವದು ಎಂದರು.

ಫೈನಲ್ ಪಂದ್ಯದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿದ್ದಾಟಂಡ ಕುಟುಂಬದ ಪಟ್ಟೇದಾರ ಪೆÇ್ರ. ಸಿ.ಪೆÇನ್ನಪ್ಪ ವಹಿಸಲಿರುವರು. ಈ ಸಂದರ್ಭ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಎಂ.ಕುಟ್ಟಪ್ಪ ಉಪಸ್ಥಿತರಿರುವರು. ಫೈನಲ್ ಪಂದ್ಯಾಟವನ್ನು ಲೆಫ್ಟಿನೆಂಟ್ ಕರ್ನಲ್ ಬಿ.ಕೆ.ಸುಬ್ರಮಣಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್, ಮಾಜಿ ಮಂತ್ರಿ ಎಂ.ಸಿ.ನಾಣಯ್ಯ, ಎಂ.ಎಲ್.ಸಿ ವೀಣಾ ಅಚ್ಚಯ್ಯ, ಚೇರಂಡ ಕಿಶನ್, ವಿ.ಆರ್.ಸುದರ್ಶನ್, ಎಸ್.ಪಿ. ರಾಜೇಂದ್ರ ಪ್ರಸಾದ್, ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪೈಕೇರ ಕಾಳಯ್ಯ, ಕೇಂದ್ರ ಮಂತ್ರಿ ಡಿ.ವಿ.ಸದಾನಂದ ಗೌಡ, ಕ್ರೀಡಾ ಮಂತ್ರಿ ವಿಜಯ ಗೋಹೆಲ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂ.ಎಲ್.ಸಿ ಸುನಿಲ್ ಸುಬ್ರಮಣಿ, ಪಳಂಗಂಡ ಪೆÇನ್ನಪ್ಪ, ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ ಸೇರಿದಂತೆ ಜಿಲ್ಲೆಯ ವಿವಿಧ ರಾಜಕೀಯ ದುರೀಣರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೈನಲ್ ಪಂದ್ಯದಲ್ಲಿ ವಿಶೇಷ ಕಾರ್ಯಕ್ರಮವಾಗಿ ಚೇಂದಿರ ನಿರ್ಮಲಾ ಬೋಪಣ್ಣ ಹಾಗೂ ತಾತಂಡ ಪ್ರತಾಪ್ ನಿರ್ದೇಶನದ ನೃತ್ಯ ರೂಪಕ, ಮೈಸೂರು ಅರಮನೆಯ ಇಂಗ್ಲಿಷ್ ಬ್ಯಾಂಡ್ ತಂಡದಿಂದ ಆಕರ್ಷಕ ಕಾರ್ಯಕ್ರಮ, ಕೊಡಗಿನ ವಿಶಿಷ್ಟ ಜಾನಪದ ನೃತ್ಯ ಪ್ರದರ್ಶನ, 2018ರ ಹಾಕಿ ಪಂದ್ಯಾಟದ ಉಸ್ತುವಾರಿ ವಹಿಸಿರುವ ಕುಲ್ಲೇಟಿರ ಕುಟುಂಬಕ್ಕೆ ಸ್ವಾಗತ, ಧ್ವಜ ಹಸ್ತಾಂತರ, ಸಂಜೆ ವಿವಿಧ ಕೊಡವ ಆಟ್, ಪಾಟ್ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಫೈನಲ್ ಪಂದ್ಯಾಟದ ನಂತರ ಬಿಟ್ಟಂಗಾಲದ ಯುವಕ ಸಂಘದ ವತಿಯಿಂದ ಬೈಕ್ ಸ್ಟಂಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಅಧ್ಯಕ್ಷ ರಮೇಶ್ ಚಂಗಪ್ಪ ಮಾತನಾಡಿ ಬಿದ್ದಾಟಂಡ ಕಪ್ ಹಾಕಿ ನಮ್ಮೆಯು ಕ್ರೀಡಾ ಪ್ರೇಮಿಗಳಲ್ಲಿ ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಪೆÇೀಸ್ಟ್ ಕಾರ್ಡ್ ಬಿಡುಗಡೆ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಪಂದ್ಯಾಟದ ಕಾರ್ಯದರ್ಶಿ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಮೈದಾನ ಸಮಿತಿ ಅಧ್ಯಕ್ಷ ಬಿ.ಬಿ.ಬೆಳ್ಯಪ್ಪ, ಸದಸ್ಯರಾದ ಸುಜಾ ನಂಜಪ್ಪ, ಸುಮನ್ ಪ್ರದೀಪ್, ಮೇರಿ ಚಿಟ್ಟಿಯಪ್ಪ, ಸೋನಾ ಪೊನ್ನಮ್ಮ ಇದ್ದರು. - ಪಿ.ವಿ. ಪ್ರಭಾಕರ್