ವೀರಾಜಪೇಟೆ, ಮೇ 14: ವೀರಾಜಪೇಟೆ ವಿಭಾಗಕ್ಕೆ ಇತ್ತೀಚೆಗೆ ಗುಡುಗು, ಮಿಂಚು ಸಹಿತ ಬಿದ್ದ ಮಳೆಗೆ ಶಿವಕೇರಿಯ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಸುಟ್ಟು ಹೋದುದರಿಂದ ಶಿವಕೇರಿಯ ನೀರು ಸರಬರಾಜು ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ನೀರು ವಿತರಣೆಗೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತಾ. 15 ರಂದು (ಇಂದು) ನೀರು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.