ವೀರಾಜಪೇಟೆ, ಮೇ. 15:
ಮೃತ ಸೋಮಯ್ಯ ಅವರಿಗೆ ಯಾವ ವಾಹನ ಡಿಕ್ಕಿಯಾಗಿದೆ ಎಂಬದು ತಿಳಿದುಬಂದಿಲ್ಲ. ರಾತ್ರಿ 12.45 ರ ಸಮಯದಲ್ಲಿ ವಾಹನ ಡಿಕ್ಕಿಯಾಗಿದೆ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಮೃತ ಸೋಮಯ್ಯ ಬಿಟ್ಟಂಗಾಲ ಸಮೀಪದ ಕಂಡಂಗಾಲ ಗ್ರಾಮದ ನಿವಾಸಿಯಾಗಿದ್ದಾರೆ.
ಸಿ.ಸಿ.ಟಿ. ವಿಯಿಂದ ನಾಪತ್ತೆಯಾಗಿರುವ ವಾಹನವನ್ನು ಪತ್ತೆ ಹಚ್ಚಬೇಕಾಗಿದೆ. ವಾಹನದ ಪತ್ತೆಗೆ ಸರ್ಕಲ್ ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ ಇಂದು ಗೋಣಿಕೊಪ್ಪದವರೆÀಗೆ ತೆರಳಿ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಸಿ.ಸಿ ಟಿ.ವಿ. ಕ್ಯಾಮರಾಗಳು ಅಸ್ಪಷ್ಟವಾಗಿರುವದರಿಂದ ತನಿಖೆಗೆ ಅಡಚಣೆ ಉಂಟಾಗುತ್ತಿದೆಯಾದರೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.