ಮಡಿಕೇರಿ, ಮೇ 14: ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಲ್ಲಿಗೆ ಸಮೀಪದ ಕೊಯನಾಡುವಿನಲ್ಲಿ ನಡೆದಿದೆ. ಚೇರಂಬಾಣೆ ಸಮೀಪದ ಕೋಪಟ್ಟಿ ಗ್ರಾಮದ ಕೊಟ್ಟುಕತ್ತಿರ ದಿವಾಕರ ಎಂಬವರ ಪುತ್ರ ಸುಬ್ಬಯ್ಯ (21) ಕೊಯನಾಡು ಎಂಬಲ್ಲಿ ಮೀನಿಗೆ ಪುರಿ ಹಾಕಲು ತೆರಳಿ ಕಾಲುಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತ ಇತರ ಮೂವರೊಂದಿಗೆ ಅಲ್ಲಿಗೆ ತೆರಳಿದ್ದನು ಎನ್ನಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.