ವೀರಾಜಪೇಟೆ, ಮೇ. 15: ವೀರಾಜಪೇಟೆ ಬಳಿಯ ಬಿಟ್ಟಂಗಾಲದ ರೋಟರಿ ಶಾಲೆ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಸಿ.ಸೋಮಯ್ಯ (54) ಎಂಬವರಿಗೆ ವಾಹನ ಡಿಕ್ಕಿಯಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವದಾಗಿ ಗ್ರಾಮಾಂತರ ಪೊಲೀಸ್ ಠಾಣೆಯ ನಂಜುಂಡ ಸ್ವಾಮಿ ತಿಳಿಸಿದ್ದಾರೆ.

ಮೃತ ಸೋಮಯ್ಯ ಅವರಿಗೆ ಯಾವ ವಾಹನ ಡಿಕ್ಕಿಯಾಗಿದೆ ಎಂಬದು ತಿಳಿದುಬಂದಿಲ್ಲ. ರಾತ್ರಿ 12.45 ರ ಸಮಯದಲ್ಲಿ ವಾಹನ ಡಿಕ್ಕಿಯಾಗಿದೆ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಮೃತ ಸೋಮಯ್ಯ ಬಿಟ್ಟಂಗಾಲ ಸಮೀಪದ ಕಂಡಂಗಾಲ ಗ್ರಾಮದ ನಿವಾಸಿಯಾಗಿದ್ದಾರೆ.

ಸಿ.ಸಿ.ಟಿ. ವಿಯಿಂದ ನಾಪತ್ತೆಯಾಗಿರುವ ವಾಹನವನ್ನು ಪತ್ತೆ ಹಚ್ಚಬೇಕಾಗಿದೆ. ವಾಹನದ ಪತ್ತೆಗೆ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಇಂದು ಗೋಣಿಕೊಪ್ಪದವರೆÀಗೆ ತೆರಳಿ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಸಿ.ಸಿ ಟಿ.ವಿ. ಕ್ಯಾಮರಾಗಳು ಅಸ್ಪಷ್ಟವಾಗಿರುವದರಿಂದ ತನಿಖೆಗೆ ಅಡಚಣೆ ಉಂಟಾಗುತ್ತಿದೆಯಾದರೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.