ಕುಶಾಲನಗರ, ಮೇ 16: ಕುಡಿದ ಅಮಲಿನಲ್ಲಿ ಕಲಹವೇರ್ಪಟ್ಟು ಬಸವನಹಳ್ಳಿ ನಿವಾಸಿಗಳಾದ ಮಣಿ, ಇಂದ್ರೇಶ್, ಪ್ರತಾಪ್, ಸುಬ್ರಮಣಿ ಎಂಬವರು, ರವಿ, ಕಿರಣ, ಗಿರೀಶ ಎಂಬವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಲ್ಲದೆ ಹಲ್ಲೆ ನಡೆಸಿದ್ದಾಗಿ ಪೊಲೀಸ್ ಪುಕಾರಾಗಿದೆ. ಈ ಮೇರೆ ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕೈಗೊಂಡಿದ್ದಾರೆ.

-ಸಿಂಚು