ಸುಂಟಿಕೊಪ್ಪ, ಮೇ 18: ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದ ಮಾರ್ಗದರ್ಶನದಲ್ಲಿ ನಡೆಯುವ ಉಚಿತ ಯೋಗಾಸನ ದಿವ್ಯಯೋಗ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರಕ್ಕೆ ಆಚಾರ್ಯ ವಿಶ್ವಾಮಿತ್ರ ಯೋಗ ಗುರುಗಳು ಜ್ಯೋತಿ ಬೆಳಗುವದರ ಮೂಲಕ ಚಾಲನೆ ನೀಡಿದರು.ಇಲ್ಲಿನ ಶ್ರೀ ಮಂಜುನಾಥಮ್ಮ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯೋಗದಿಂದ ಏಕಾಗ್ರತೆ, ಜ್ಞಾಪಕ ಶಕ್ತಿ ಆರೋಗ್ಯವು ಸದೃಢಗೊಳ್ಳುತ್ತದೆ. ಇದರಿಂದ ದೇಹದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ 10 ದಿನಗಳ ಕಾಲ ನಡೆಯುವ ಉಚಿತ ದಿವ್ಯ ಯೋಗ ಶಿಬಿರದಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಆಚಾರ್ಯ ವಿಶ್ವಾಮಿತ್ರ ಗುರುಗಳು ಶಿಬಿರಾರ್ಥಿಗಳಿಗೆ ಯೋಗ ಶಿಬಿರ ನಡೆಸಿದರು.

ತಾ. 24 ರಂದು ಶ್ರೀ ದಿವ್ಯ ಜ್ಞಾನಾನಂದ ಸ್ವಾಮೀಜಿಯವರು ಶಿಬಿರಾರ್ಥಿಗಳಿಗೆ ಯೋಗ ಪ್ರಾಣಾಯಾಮ ಮತ್ತು ಧ್ಯಾನವನ್ನು ಹೇಳಿಕೊಡಲಿದ್ದಾರೆ.