ಸಿದ್ದಾಪುರ ಮೇ 18: ನೆಲ್ಯಹುದಿಕೇರಿ ಗೌಡ ಸಂಘದ 15ನೇ ವಾರ್ಷಿಕೋತ್ಸವವು ಶ್ರೀ ಸತ್ಯ ನಾರಾಯಣ ದೇವಾಲಯ ಸಭಾಂಗಣದಲ್ಲಿ ನಡೆಯಿತು. ಸತ್ಯ ನಾರಾಯಣ ಪೂಜೆ ನೆರವೇರಿಸಿದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್, ಕಣ್ಣು ಕಟ್ಟಿ ಮಡಿಕೆ ಒಡೆಯುವದು, ಬಾಂಬ್ ಇನ್ ದ ಸಿಟಿ ಮುಂತಾದ ಕ್ರೀಡೆಯಲ್ಲಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭ ಸಂಘದ ಅಧ್ಯಕ್ಷ ಹಳಗದ್ದೆ ಮಾದಪ್ಪ ಮಾತನಾಡಿ, ವರ್ಷಕ್ಕೆ ಒಂದು ಬಾರಿ ಎಲ್ಲರೂ ಸೇರುವದರಿಂದ ಕುಟುಂಬಗಳ ನಡುವೆ ಬಾಂದವ್ಯ ವೃದ್ದಿಯಾಗುವದಲ್ಲದೆ ಪರಸ್ಪರ ಭೇಟಿಯಾಗಲು ಅವಕಾಶವಾಗಲಿದೆ ಎಂದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಎನ್.ಸಿ ಚಂದ್ರ ಶೇಖರ್, ಉಪಾಧ್ಯಕ್ಷ ಟಿ.ಬಿ ತಿಮ್ಮಯ್ಯ, ಟಿ.ಪಿ. ನಂಜಪ್ಪ, ಖಜಾಂಚಿ ಸುಧೀರ್ ಕುಮಾರ್ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು ಇದ್ದರು.