ಗೋಣಿಕೊಪ್ಪಲು, ಮೇ 19 : ಅಳಮೇಂಗಡ ಕ್ರಿಕೆಟ್ ಕಪ್ ಫೈನಲ್ ಹಾಗೂ ಸಮಾರೋಪ ಸಮಾರಂಭ ನಾಳೆ (ಮೇ 21) ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ ನಂತರ ನಡೆಯುವ ಸಮಾರೋಪಕ್ಕೆ ಮುಖ್ಯ ಅತಿಥಿಯಾಗಿ ಸಂಸದ ಪ್ರತಾಪ್ ಸಿಂಹ ಪಾಲ್ಗೊಳ್ಳಲಿದ್ದಾರೆ. ಬೆ. 10.30 ಕ್ಕೆ ಕಳಕಂಡ ಹಾಗೂ ಬಿರುನಾಣಿ ಅಣ್ಣಳಮಾಡ ನಡುವೆ ಫೈನಲ್ ಹಣಾಹಣಿ ನಡೆಯಲಿದೆ.

ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಫೌಂಡೇಷನ್ ಪ್ರಮೋಟರ್ಸ್ ಲಿಮಿಟೆಡ್‍ನ ಉದ್ಯಮಿ ಎಸ್. ಆರ್. ಸ್ವಾಮಿ, ಉದ್ಯಮಿ ಚೇರಂಡ ಕಿಶನ್, ರಾಜ್ಯ ಹೆದ್ದಾರಿ ಹಾಗೂ ಬಂದರು ಒಳನಾಡು ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಚೊಟ್ಟೆಯಂಡಮಾಡ ಎಂ ರಾಜೇಂದ್ರ, ಡಾ. ಪ್ರತಾಪ್ ಬೆಳ್ಯಪ್ಪ, ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಯಪ್ಪ, ಉದ್ಯಮಿ ಮುಳಿಯ ಕೇಶವ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಅಳಮೇಂಗಡ ಕುಟುಂಬ ಅಧ್ಯಕ್ಷ ವಿವೇಕ್ ಅಯ್ಯಪ್ಪ, ಅಳಮೇಂಗಡ ಕ್ರಿಕೆಟ್ ಕಪ್ ಅಧ್ಯಕ್ಷ ಬೋಸ್ ಮಂದಣ್ಣ, ಉಪಾಧ್ಯಕ್ಷರುಗಳಾದ ಎ ಪಿ. ಸುರೇಶ್ ಗಣಪತಿ, ನದಿರಾ ಸೋಮಯ್ಯ, ಎ.ಸಿ. ಸುರೇಶ್ ಸುಬ್ಬಯ್ಯ, ಕಾರ್ಯದರ್ಶಿ ಮೋನಾ ಚೆಂಗಪ್ಪ, ಖಜಾಂಚಿ ಎ.ಕೆ. ರವಿ, ಮಾಧ್ಯಮ ಸಂಚಾಲಕ ಎ.ಪಿ. ರಮೇಶ್, ಸಲಹೆಗಾರರುಗಳಾದ ಎ.ಪಿ. ವಿಟಲ್, ಎ.ಎಂ. ತಮ್ಮಯ್ಯ, ಕಮಿಟಿ ಸದಸ್ಯ ದಿಲ್ಲು ತಿಮ್ಮಯ್ಯ ಉಪಸ್ಥಿತರಿರುವರು.

ಮಿರಾಕಲ್ ಮ್ಯೂಸಿಕ್ : ಸಂಜೆ 6.30 ರಿಂದ 4 ಗಂಟೆಗಳ ಕಾಲ ಮ್ಯೂಸಿಕ್ ಹಾಗೂ ಮನರಂಜನಾ ಕಾರ್ಯಕ್ರಮ ಫೌಂಡೇಷನ್ ಪ್ರಮೋಟರ್ಸ್ ಹಾಗೂ ಡೆವಲಪರ್ಸ್ ಸಹಯೋಗದಲ್ಲಿ ನಡೆಯಲಿದೆ. ಮೈಸೂರು ಮಿರಾಕಲ್ ತಂಡದಿಂದ 2 ಗಂಟೆ ಬಾಲಿವುಡ್ ಡ್ಯಾನ್ಸ್ ಕಾರ್ಯಕ್ರಮ, ನಂತರ 2 ಗಂಟೆ ಡಿಜೆ ಕಾರ್ಯಕ್ರಮ ನಡೆಯಲಿದೆ.