ಕೂಡಿಗೆ, ಮೇ 20: ಮರದಿಂದ ಬಿದ್ದು ವ್ಯಕ್ತಿಯೋರ್ವ ದುರ್ಮರಣಕ್ಕೀ ಡಾಗಿರುವ ಘಟನೆ ಇಲ್ಲಿಗೆ ಸಮೀಪದ ಯಡವಾರೆಯಲ್ಲಿ ನಡೆದಿದೆ.ಬ್ಯಾಡಗೊಟ್ಟ ನಿರಾಶ್ರಿತರ ಕೇಂದ್ರದಲ್ಲಿ ಗುಡಿಸಲು ನಿರ್ಮಿಸಿ ವಾಸವಾಗಿರುವ ಸೋಮ (33) ಎಂಬಾತ ಇಲ್ಲಿನ ಗಣಿ ಪ್ರಸಾದ್ ಎಂಬವರ ತೋಟದ ಮರ ಕಪಾತ್ ಕೆಲಸಕ್ಕೆ ತೆರಳಿದ್ದು, ಗುರುವಾರ ಮರದಿಂದ ಜಾರಿ ಬಿದ್ದು ಗಾಯ ಗೊಂಡಿದ್ದರು. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದು, ಸೋಮವಾರಪೇಟೆ ಪೊಲೀಸ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.