ಮಡಿಕೇರಿ, ಮೇ 22: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರಾಗಿದ್ದ ಕೊಡಗು ಮೂಲದ ವ್ಯಕ್ತಿ ಶ್ರೀರಂಗಪಟ್ಟಣದಲ್ಲಿ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೂಲತಃ ಕಕ್ಕಬೆಯ ಕಲಿಯಂಡ ಕಾರ್ಯಪ್ಪ (49) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಕುಟುಂಬ ಮೃತರ ಅಣ್ಣನ ಮಗಳ ನಿಶ್ಚಿತಾರ್ಥ ಸಲುವಾಗಿ ಗೋಣಿಕೊಪ್ಪಲುವಿಗೆ ಬಂದಿದ್ದರು. ಶ್ರೀರಂಗಪಟ್ಟಣದ ಮನೆಯಲ್ಲಿ ಈ ವೇಳೆ ಕಾರ್ಯಪ್ಪ ನೇಣಿಗೆ ಶರಣಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ಆತ್ಮಹತ್ಯೆಗೆ ಹೊಟ್ಟೆನೋವು ಕಾರಣವೆಂದು ತಿಳಿಸಿರುವ ಮೇರೆಗೆ, ಶ್ರೀರಂಗಪಟ್ಟಣ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.