ಮಡಿಕೇರಿ, ಮೇ 22: ಜಿಲ್ಲೆಯಾ ದ್ಯಂತ ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯಗಳು ಕಂಡುಬರುತ್ತಿದ್ದು, ಸಿಡಿಲಿನ ಆರ್ಭಟಕ್ಕೆ ದೂರವಾಣಿ ವಿನಿಮಯ ಕೇಂದ್ರದಲ್ಲಿನ ಯಂತ್ರೋಪ ಕರಣಗಳು ಹಾನಿಗೀಡಾಗಿರುವದು ಕಾರಣವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ ಇದ್ದೇ ಇರುತ್ತದೆ. ಆದರೆ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನ ಎಲ್ಲೆಡೆ ವ್ಯತ್ಯಯವಾಗುತ್ತಿದೆ. ಈ ಬಾರಿಯ ಅಬ್ಬರದ ಸಿಡಿಲು- ಗುಡುಗಿನಿಂದಾಗಿ ಈ ತೊಂದರೆ ಕಂಡುಬರುತ್ತಿ ರುವದಾಗಿ ತಿಳಿದುಬಂದಿದೆ.