ವೀರಾಜಪೇಟೆ, ಮೇ 22: ಕೇವಲ ರೂ ಇಪ್ಪತ್ತು ಸಾಲ ಪಡೆದು ಹಿಂತಿರುಗಿಸದಿರುವದರಿಂದ ತನ್ನ ಸಹೋದ್ಯೋಗಿ ಕಾರ್ಮಿಕನ ವiರ್ಮಾಂಗಕ್ಕೆ ಚೂರಿಯಿಂದ ತಿವಿದು ಕೊಲೆ ಮಾಡಿರುವ ಘಟನೆ ಅಮ್ಮತ್ತಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ 9 ಗಂಟೆಯ ಸಮಯದಲ್ಲಿ ಅಮ್ಮತ್ತಿ ಮುಖ್ಯರಸ್ತೆಯ ಸರ್ಕಲ್‍ನಲ್ಲಿರುವ ಬಾರ್‍ನ ಮುಂದೆ ನಿಂತಿದ್ದ ಎರವರ ಮಣಿ (26) ಎಂಬಾತನಿಗೆ ಅಮ್ಮತ್ತಿಯ ಪೈಸಾರಿಯ ನಿವಾಸಿ ಎರವರ ಕುಳ್ಳ ಎಂಬವರ ಮಗ ಮಂಜು (28) ಎಂಬಾತ ಮರ್ಮಾಂಗಕ್ಕೆ ಚಾಕುವಿನಿಂದ ಇರಿದು ಗಂಭೀರ ಸ್ವರೂಪದ ಗಾಯಗೊಳಿಸಿ ದ್ದು, ಆತನನ್ನು ಅಮ್ಮತ್ತಿ ರೂರಲ್ ಇಂಡಿಯಾ ಅಮೇರಿಕನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ರಾತ್ರಿ 11 ಗಂಟೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಮೃತನ ಪತ್ನಿ ಪೊನ್ನಮ್ಮ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.

ಮೃತ ಮಣಿ ಹಾಗೂ ಮಂಜು ನಿತ್ಯ ಜೊತೆಯಲ್ಲಿಯೇ ತೋಟದ ಕೆಲಸಕ್ಕೆ ಹೋಗುತ್ತಿದ್ದು ಕೆಲವು ದಿನಗಳ ಹಿಂದೆ ಮಂಜು ಮೃತ ಮಣಿಗೆ ಸಾಲವಾಗಿ ರೂ 20 ನೀಡಿದ್ದನು. ನಿನ್ನೆ ದಿನ ಬಾರ್Àನಲ್ಲಿ ಮದ್ಯ ಸೇವಿಸಿದ ಮಂಜು, ಬಾರ್‍ನ ಮುಂದೆ ನಿಂತಿದ್ದ ಮಣಿಯನ್ನು ಸಾಲ ಹಿಂತಿರುಗಿಸು ವಂತೆ ಕೇಳಿದಾಗ ಮಣಿ ಹಣ ನೀಡಿಲ್ಲ. ಈ ವೇಳೆ ಮಂಜು ತೋಟದ ಕೆಲಸಕ್ಕೆಂದು ತಂದಿದ್ದ ಚೂರಿಯಿಂದ ತಿವಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಆರೋಪಿ ಮಂಜು ತಲೆಮರೆಸಿಕೊಂಡಿದ್ದಾನೆ. ಮೃತ ಮಣಿ ಅಮ್ಮತ್ತಿಯ ಸಂಧ್ಯಾ ದೇವಯ್ಯ ಎಂಬವರ ಕಾಫಿ ತೋಟದ ಲೈನ್ ಮನೆಯಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದ.

ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ನಂಜುಂಡಸ್ವಾಮಿ ಸಿಬ್ಬಂದಿಯೊಂದಿಗೆ ಕೊಲೆ ನಡೆದ ಸ್ಥಳದ ಮಹಜರು ನಡೆಸಿದರು.