ಸೋಮವಾರಪೇಟೆ, ಮೇ 22: ತಾಲೂಕಿನ ಭುವಂಗಾಲ ಗ್ರಾಮದಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಭುವಂಗಾಲ ಗ್ರಾಮದ ಅಶೋಕ ಎಂಬವರು ತಮ್ಮ ಮಗನೊಂದಿಗೆ ಮನೆಗೆ ತೆರಳುತ್ತಿದ್ದ ಸಂದರ್ಭ ದಾರಿ ತಡೆದು ಅದೇ ಗ್ರಾಮದ ರಮಾನಂದ, ದೇವಯ್ಯ ಅವರುಗಳು ಹಣದ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಅಶೋಕ ಅವರು ದೂರು ನೀಡಿದ್ದಾರೆ.ಇದೇ ಘಟನೆಗೆ ಸಂಬಂಧಿಸಿದಂತೆ ರಮಾನಂz ಮತ್ತೊಂದು ದೂರು ನೀಡಿದ್ದು, ದೇವಯ್ಯ, ಅಶೋಕ ಮತ್ತು ಅವರ ಮಗ ಯಶವಂತನ ನಡುವೆ ಜಗಳ ನಡೆಯುತ್ತಿದ್ದು, ಮಧ್ಯೆಪ್ರವೇಶಿಸಿ ಜಗಳ ಬಿಡಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಅಶೋಕ, ಸಾವಿತ್ರಿ, ಯಶ್ವಂತ್, ಸುಜಯ್ ಅವರುಗಳು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದ್ದಾರೆ. ಎರಡೂ ಕಡೆಯಿಂದ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.