*ಗೋಣಿಕೊಪ್ಪಲು, ಮೇ 23: ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಪೊನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯ ಚಂಬಯ್ಯನ ಕೆರೆಯ ಹೂಳೆತ್ತುವ ಕಾರ್ಯ ನಡೆಸಲಾಯಿತು. ಶ್ರೀಜಾ ಶಾಜಿ ಅವರ ನೇತೃತ್ವದಲ್ಲಿ 2 ಲಕ್ಷ ವೆಚ್ಚದ ಅನುದಾನದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ನಡೆಯಿತು.ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಜಿಲ್ಲೆ ಯಲ್ಲಿ ಬಹುತೇಕ ಕೆರೆಗಳು ಪುನಶ್ಚೇತನಗೊಳ್ಳಬೇಕಾಗಿದೆ. ಅಂತರ್ಜಲ ಕುಸಿತದ ಹಿನ್ನೆಲೆ ಕೆರೆಗಳ ಅಭಿವೃದ್ಧಿ ಮಾಡಬೇಕಾಗಿದೆ. ವಿಶೇಷ ಅನುದಾನಗಳನ್ನು ಬಳಸಿ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಬೇಕು ಎಂದರು. ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಕಿರುಮಾವುಕೆರೆ, ನಡಿಕೇರಿ ಗ್ರಾಮದ ಸ್ಮಶಾನ ಕೆರೆಯ ಹೂಳೆತ್ತುವ ಕಾರ್ಯಕ್ಕೆ ತಲಾ 2 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದÀರ್ಭ ತಾ.ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ತಾ.ಪಂ. ಮಾಜಿ ಸದಸ್ಯ ಶಾಜಿ ಅಚ್ಯುತ್ತನ್, ಪೊನ್ನಂಪೇಟೆ ಹೋಬಳಿ ಅದ್ಯಕ್ಷ ಮತ್ರಂಡ ದಿಲ್ಲು ಹಾಗೂ ಗ್ರಾಮಸ್ಥರಾದ ವಿಜು ಹಾಗೂ ರಾಜ ಉಪಸ್ಥಿತರಿದ್ದರು.