ಮೂರ್ನಾಡು, ಮೇ 25 : ಕೊಡಗು ಕೆಂಬಟ್ಟಿ ಜನಾಂಗದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.ಮೂರ್ನಾಡು ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಏರ್ಪಡಿಸಲಾದ ವಾಲಿಬಾಲ್ ಪಂದ್ಯವನ್ನು ಜೋಡುಬೀಟಿಯ ನಿವೃತ್ತ ಸೈನಿಕ ಬಿಲ್ಲರಿಕುಟ್ಟಂಡ ಪ್ರಭು ಅಯ್ಯಪ್ಪ ಉದ್ಘಾಟಿಸಿದರು. ಕವಿತ ಪ್ರಕಾಶ್ ಮಹಿಳೆಯರ ಥ್ರೋಬಾಲ್ ಪಂದ್ಯವನ್ನು ಉದ್ಘಾಟಿಸಿದರು.ಬಿಲ್ಲರಿಕುಟ್ಟಂಡ ಪ್ರಭು ಅಯ್ಯಪ್ಪ ಮಾತನಾಡಿ,

(ಮೊದಲ ಪುಟದಿಂದ) ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವದು ಮುಖ್ಯ. ಕ್ರೀಡಾಕೂಟಗಳಿಂದ ಜನಾಂಗದವರು ಒಂದೆಡೆ ಸೇರುವ ಅವಕಾಶ ಲಭಿಸುತ್ತದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಬಲಮುರಿಯ ಬೆಳ್ಯಪ್ಪ, ಉಪನ್ಯಾಸಕಿ ಡಾ. ರಾಧಿಕ, ಕಡಂಗ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ರೋಹಿಣಿ, ದೇವಯ್ಯ, ಅರುಣ, ಗಣೇಶ್ ಅಪ್ಪುಕುಂಞÂ, ಬಾಬಣಿ ಇನ್ನಿತರರು ಹಾಜರಿದ್ದರು.