ಮಡಿಕೇರಿ, ಮೇ 27 : ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಆಶ್ರಯದಲ್ಲಿ ಜನಾಂಗದವರಿಗೆ ಮೊದಲ ವರ್ಷದ ಕ್ರೀಡಾಕೂಟವನ್ನು ತಾ. 28ರಂದು (ಇಂದು) ಸಿದ್ದಾಪುರದ ಜೂನಿಯರ್ ಕಾಲೇಜು ಮೈದಾನದಲ್ಲಿ ತಮಿಳು ಯುವವೇದಿಕೆಯಿಂದ ಆಯೋಜಿಸಿದ್ದು ಯುವಕರಿಗೆ ಕಾವೇರಿ ಕ್ರಿಕೆಟ್ ಕಪ್ ಸೇರಿದಂತೆ ಮಹಿಳೆಯರಿಗೆ, ಪುರುಷರಿಗೆ ಹಾಗೂ ಪುಟಾಣಿಗಳಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡಾಕೂಟ ನಡೆಯಲಿವೆ.

ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ತಿರುಮಾಲ್ ರಾಜ, ಉಪಾಧ್ಯಕ್ಷರಾದ ಮೋಹನ್ ರಾಜ್, ಕುಮಾರಿ ಸುಬ್ರಮಣಿ, ಗೋಣಿಕೊಪ್ಪ ಸಂಘದ ಅಧ್ಯಕ್ಷ ಸುಬ್ರಮಣಿ, ಕಡಗದಾಳು ಸಂಘದ ಖಜಾಂಚಿ ಆರ್. ರಾಜ, ಕುಟ್ಟ ಸಂಘದ ಅಧ್ಯಕ್ಷ ಮುತ್ತಯ್ಯ, ಕುಶಾಲನಗರ ಸಂಘದ ಅಧ್ಯಕ್ಷ ಕಾರ್ತಿಶನ್, ಸಂಪಾಜೆ ಅಮ್ಮನ್ ಸಹಕಾರ ಸಂಘದ ಕಾರ್ಯರ್ಶಿ ಶಿವ ಪೆರುಮಾಲ್ ಮತ್ತಿತರರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ತಿರುಮಾಲ್ ರಾಜ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಜಯ್, ದಿವ್ಯ, ಅರವಿಂದ್, ಪಾಂಡ್ಯನ್, ವಿಘ್ನೇಶ್, ಮಹೇಶ್ ಪಿಳೈ, ಪ್ರಭಾ, ಅವಿನಾಶ್, ಡಿ.ಎಂ. ಯತೀನ್, ಸಂಗೀತ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ತಮಿಳು ಯುವ ವೇದಿಕೆ ಪ್ರಕಟಣೆ ತಿಳಿಸಿದೆ.