ಮಡಿಕೇರಿ, ಮೇ. 29: ಚಮ್ಮಣಮಾಡ ವಾಣಿ ರಾಘವೇಂದ್ರ ಅವರನ್ನು ಬೆಂಗಳೂರಿನ ಕನ್ನಡ ಭಾರತೀಯ ಸಾಂಸ್ಕøತಿಕ ಅಕಾಡೆಮಿ ವತಿಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಕನ್ನಡ ನಾಡು ನುಡಿಗಾಗಿ ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ‘‘ಭಾರತ ಭೂಷಣ’’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿತ್ರದಲ್ಲಿ ಪತಿ ಸಿ.ಬಿ.ರಾಘವೇಂದ್ರ, ಪುತ್ರ ಸಿ. ಆರ್. ಟುವೀಶ್, ಚಿತ್ರನಟಿ ರೇಖಾದಾಸ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ್ ಪಾಟೀಲ, ಡಾ. ಶಾಂತವೀರ ಸ್ವಾಮೀಜಿ, ನಿರೂಪಕಿ ರಕ್ಷಾ ಮತ್ತು ಅಧ್ಯಕ್ಷ ಪ್ರೊ. ಡಾ. ಜಿ. ಪಿ. ರಾಜು ಇದ್ದರು.