ಕುಶಾಲನಗರ, ಮೇ 28: ಕೇಂದ್ರ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಿರುವದನ್ನು ಸ್ವಾಗತಿಸಿ ಕುಶಾಲನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರದ ಗಣಪತಿ ದೇವಾಲಯದ ಮುಂಭಾಗ ಸೇರಿದ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭ ಪ್ರಮುಖರಾದ ಅನೀಸ್,ಕೆ.ಜಿ.ಮನು, ಲಕ್ಷ್ಮಿನಾರಾಯಣ, ಜಿ.ಎಲ್ ನಾಗರಾಜ್, ಮಧುಸೂದನ್, ವೈಶಾಕ್ ಮತ್ತಿತರರು ಇದ್ದರು.