ಶನಿವಾರಸಂತೆ, ಮೇ 30: ಶನಿವಾರಸಂತೆ ಸಮೀಪದ ಮೂದರವಳ್ಳಿ ಗ್ರಾಮದ ರಸ್ತೆಯಲ್ಲಿ ಸೋಮವಾರ ರಾತ್ರಿ ಕೊಡ್ಲಿಪೇಟೆ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ಶನಿವಾರಸಂತೆ ಕಡೆಯಿಂದ ಹೋಗುತ್ತಿದ್ದ ಆಲ್ಟೋ ಕಾರು ಡಿಕ್ಕಿಯಾಗಿದ್ದು, ಬೈಕ್ ಸವಾರ ಹಿಂಬದಿ ಸವಾರರಿಬ್ಬರಿಗೂ ಕಾಲು ಹಾಗೂ ಹಣೆಯ ಭಾಗಕ್ಕೆ ಗಾಯವಾಗಿದ್ದು, ಗಾಯಾಳುಗಳನ್ನು ಶನಿವಾರಸಂತೆ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ಹಂಡ್ಲಿ ಗ್ರಾಮದ ನಿವಾಸಿ ಆನಂದ ಹಾಗೂ ಗುಡುಗಳಲೆ ಗ್ರಾಮದ ನಿವಾಸಿ ಚಂದ್ರ ಮೋಟಾರ್ ಸೈಕಲಿನಲ್ಲಿ ಕೊಡ್ಲಿಪೇಟೆಗೆ ಹೋಗಿ ವಾಪಸು ಬರುತ್ತಿರುವಾಗ ಮೂದರವಳ್ಳಿ ಗ್ರಾಮದ ಬಳಿ ಶನಿವಾರಸಂತೆ ಕಡೆಯಿಂದ ಬರುತ್ತಿದ್ದ ಪ್ರಕ್ಷಿತ್ ಚಾಲಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಈ ಬಗ್ಗೆ ದೊರೆತ ದೂರಿನ ಮೇರೆ ಶನಿವಾರಸಂತೆ ಠಾಣೆಯ ಹೆಡ್ ಕಾನ್ಸ್‍ಟೇಬಲ್ ಮಹೇಶ್ ವಿಧಿ 279, 337, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ಕಾರು ಹಾಗೂ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ.