ಕೂಡಿಗೆ, ಜೂ. 1: ಕೂಡಿಗೆಯ ಜಿಲ್ಲಾ ಕೃಷಿ ಕ್ಷೇತ್ರದ ಆವರಣದಲ್ಲಿ ರೈತ ಮಹಿಳೆಯರಿಗೆ ಮೂರು ದಿನಗಳ ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಕೃಷಿ ಸಹಾಯಕ ನಿರ್ದೇಶಕಿ ಕೋಮಲ ಉದ್ಘಾಟಿಸಿ, ಮಹಿಳೆಯರು ಮನೆ ನಿರ್ವಹಣೆಯ ಜೊತೆಗೆ ಉಪ ಕಸುಬುಗಳನ್ನು ರೂಢಿಸಿಕೊಳ್ಳುವದರ ಮೂಲಕ ತನ್ನ ಸಂಸಾರವನ್ನು ಉತ್ತಮವಾಗಿ ಸಾಗಿಸಬಹುದು. ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ತರಬೇತಿಯನ್ನು ಪಡೆದು ತಮ್ಮನ್ನು ಕೃಷಿಯತ್ತ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಜುನಾಥ್ ಡೆನ್ನಿ ಡಿಸೋಜ, ರಮೇಶ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ರೈತ ಮಹಿಳೆಯರಿಗೆ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.