ಮಡಿಕೇರಿ, ಜೂ. 1: ಹೆಚ್.ಎಸ್. ಕೃಷ್ಣ, ದ್ವಿ.ದ.ಸ, ಜಿಲ್ಲಾ ಬಿಸಿಎಂ ಕಚೇರಿ ಮಡಿಕೇರಿಯ ಸಿಬ್ಬಂದಿ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಹಿನ್ನೆಲೆ ಅವರಿಗೆ ಈ ಸಂದರ್ಭ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.ಗುಡ್ಡೆಹೊಸೂರು: ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ.ಆರ್. ಚಂದ್ರವತಿ ಅವರು 27 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಮೇ 31 ರಂದು ನಿವೃತ್ತಿಗೊಂಡರು. ಇವರನ್ನು ಶಾಲೆಯ ಶಿಕ್ಷಕ ವೃಂದ ಮತ್ತು ಎಸ್.ಡಿ.ಎಂ.ಸಿ. ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್ ಮತ್ತು ಸದಸ್ಯರು ಹಾಜರಿದ್ದರು.ಮಡಿಕೇರಿ: ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹೆಚ್. ವಿಶ್ವನಾಥ್ ಪೂಜಾರಿ ಅವರು ಸರ್ಕಾರಿ ಸೇವೆಯಿಂದ ಮೇ 31 ರಂದು ನಿವೃತ್ತಿಯಾದರು. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ಡಿ. ದೇವರಾಜ ಅರಸು ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಸುಬ್ರಮಣಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕೆ.ಕೆ. ಕುಮಾರ್, ಕೆ.ವಿ. ಸುರೇಶ್, ಹೆಚ್.ಡಿ. ಪುಟ್ಟರಾಜು ಇತರ ಸಿಬ್ಬಂದಿ ಹಾಜರಿದ್ದರು.