ವೀರಾಜಪೇಟೆ, ಜೂ. 1: ಕರಡ ಗ್ರಾಮದ ಪಾಂಡಂಡ ದಿನೇಶ್ ಕರುಂಬಯ್ಯ (45) ಎಂಬವರು ಇಂದು ಮನೆಯ ಕೊಠಡಿಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಅವರ ಪತ್ನಿ ದಿವ್ಯ ಕರುಂಬಯ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕರುಂಬಯ್ಯ ಅವರು ಮರಣ ಪತ್ರವನ್ನು ಬರೆದಿಟ್ಟಿದ್ದು, ಸಾಲಬಾಧೆಯಿಂದ ಜೀವನ ನಡೆಸಲು ದುಸ್ತರವಾಗಿರುವದರಿಂದ ಆತ್ಮಹತ್ಯೆಗೆ ಶರಣಾಗುತ್ತಿರುವದಾಗಿ ತಿಳಿಸಲಾಗಿದೆ.

ಪತ್ನಿ ಇಬ್ಬರು ಮಕ್ಕಳನ್ನು ಅಗಲಿರುವ ಕರುಂಬಯ್ಯ ಅವರಿಗೆ ಸ್ವಲ್ಪ ಭೂಮಿ ಇದ್ದು ಇದರಿಂದಲೇ ಜೀವನ ನಡೆಸುತ್ತಿದ್ದರು.