ಸುಂಟಿಕೊಪ್ಪ, ಜೂ. 3: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸುಂಟಿಕೊಪ್ಪದ ಹಿಂದೂ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಶಿವಾಜಿ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಹಾಸನ ಗ್ರಾಹಕರ ವೇದಿಕೆ ಅಧ್ಯಕ್ಷ ಎ. ಲೋಕೇಶ್ ಕುಮಾರ್ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಸ್ಥಿರತೆ, ಶಾರೀರಿಕ, ದೃಢತೆ ಹೆಚ್ಚಲಿದ್ದು, ಆರೋಗ್ಯವನ್ನು ಕಾಪಾಡಬಹುದು ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮರ ವ್ಯಾಪಾರಿ ಪ್ರಸಾದ್ ಕುಟ್ಟಪ್ಪ ಉಪಸ್ಥಿತರಿದ್ದರು. ಮೊದಲಿನ ಪಂದ್ಯ ಭೂತನಕಾಡು ಹಾಗೂ ಮಾದಾಪುರ ತಂಡಗಳ ನಡುವೆ ನಡೆಯಿತು.