ಶ್ರೀಮಂಗಲ, ಜೂ. 3: ಹಕ್ಕುಪತ್ರ ಪ್ರಮಾಣ ಪತ್ರವಿದ್ದಂತೆ ಅದನ್ನು ಯಾರೂ ಯಾರಿಗೂ ಮಾರಾಟ ಮಾಡಬಾರದು ಎಂದು ವೀರಾಜಪೇಟೆ ವಿಧಾನ ಸಭೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ಟಿ. ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಮಾತನಾಡಿದರು.

ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಸದಸ್ಯರಾದ ಪಿ.ಕೆ. ಸರೋಜ, ಪೊಯಿಲೇಂಗಡ ಪಲ್ವಿನ್, ತಹಶೀಲ್ದಾರ್ ಗೋವಿಂದರಾಜು, ಉಪ ತಹಶೀಲ್ದಾರ್ ಹೆಚ್.ಕೆ. ಶಿವಪ್ಪ ಪೂಣಚ್ಚ, ಎ.ಪಿ.ಎಂ.ಸಿ.. ಸದಸ್ಯೆ ಬೊಳ್ಳಜೀರ ಸುಶೀಲ, ಟಿ. ಶೆಟ್ಟಿಗೇರಿ ಗ್ರಾ.ಪಂ. ಉಪಾಧ್ಯಕ್ಷೆ ಕೆ.ಎಸ್. ಯಶೋದ ಅಭಿವೃದ್ಧಿ ಅಧಿಕಾರಿ ಎಂ.ಎಲ್. ಕವಿತ, ಸದಸ್ಯರಾದ ಮುಕ್ಕಾಟಿರ ಸಂದೀಪ್, ಚೊಟ್ಟೆಯಂಡಮಾಡ ಉದಯ, ಬಾಚೀರ ಜಾನ್ಸಿ, ಪೆಮ್ಮಂಡ ಸಬಿತ ಕುಶಾಲಪ್ಪ, ಉಳುವಂಗಡ ದಮಯಂತಿ ಹರೀಶ್, ತಡಿಯಂಗಡ ಮೀನ, ಕೆಚ್ಚಿ, ಪಿ.ಬಿ. ಚಂದ, ಪ್ರಮುಖರಾದ ಕುಂಞಂಗಡ ಅರುಣ್ ಭೀಮಯ್ಯ, ತೀತೀರ ಧರ್ಮಜ ಉತ್ತಪ್ಪ, ಅಪ್ಪಚ್ಚಂಗಡ ಮೋಟಯ್ಯ ಮತ್ತಿತರರು ಭಾಗವಹಿಸಿದ್ದರು.